Posts

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

 ಒಂದು ಹಳ್ಳಿಯಿಂದ ಪಟ್ಟಣಕ್ಕೆ ಒಂದು ಕುಟುಂಬ ವಲಸೆ ಬಂದಿತು. ಅದೊಂದು ಅವಿಭಕ್ತ ಕುಟುಂಬವಾಗಿತ್ತು. ಮನೆಯ ಯಜಮಾನ ಮತ್ತು ಆತನ ಮಗ ಇಬ್ಬರೂ ಕೆಲಸ ಮಾಡಿ, ಅದರಿಂದ ಬಂದ ಹಣದಿಂದ ಮನೆಯನ್ನು ನಡೆಸಿಕೊಂಡು ಹೋಗುತಿದ್ದರು. ಮಗ ಸಂಜೆ ಕಾಲೇಜಿಗೆ ಸೇರಿ, ಕಷ್ಟ ಪಟ್ಟು ಬಿಎಸ್ಸಿ, ಬಿಎಡ್ ಮುಗಿಸಿ ಒಂದು ಸರ್ಕಾರಿ ಶಾಲೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಾಗ ಮನೆಯಲ್ಲಿ ಸ್ವಲ್ಪ ನೆಮ್ಮದಿ. ಮಗನ ಅಕ್ಕನಿಗೆ ಮದುವೆಯಾಗಿ, ಆಕೆಯ ಗಂಡ ಮತ್ತು ಅವರ ಎಂಟು ಮಕ್ಕಳ ಜವಾಬ್ದಾರಿ ಕೂಡ ಮನೆಯ ಹಿರಿಯ ಮತ್ತು ಮಗನ ಹೆಗಲ ಮೇಲಿತ್ತು. ಮಗನ ಮದುವೆಯಾಗಿ ಆತನಿಗೂ ಎರಡು ಮಕ್ಕಳಾಗಿ ಅವುಗಳ ಜವಾಬ್ದಾರಿಯೂ ಜೊತೆಯಾಗಿ ಕೂಡಿಕೊಂಡಿತು. ಹೇಗೋ, ಎಲ್ಲರೂ ಜಾಣತನದಿಂದ ಆದಾಯ ಖರ್ಚು ನೋಡಿಕೊಂಡು, ಮನೆಯನ್ನು ಐಷಾರಾಮಿಯಾಗಿ ಅಲ್ಲದಿದ್ದರೂ, ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತಿದ್ದರು. (ಕಥೆಯ ಅನುಕೂಲಕ್ಕೆ, ಕಥೆಯ ಕೇಂದ್ರ ಬಿಂದುವಾದ ಹಿರಿಯರ ಮಗನನ್ನು, ಹೆಸರಿಲ್ಲದೆ, "ಮಗ" ಎಂದೇ ಗುರುತಿಸೋಣ.) ಮನೆಯಲ್ಲಿ ಹೆಚ್ಚು ಓದಿದ್ದು ಮಗನೇ. ಹಾಗಾಗಿ ಮನೆ ಮಕ್ಕಳ ಶಾಲೆ, ಆಸ್ಪತ್ರೆ, ಮತ್ತಿತರ ಸರ್ಕಾರಿ ಸಂಬಂಧಿತ ಅರ್ಜಿಗಳನ್ನು ಭರ್ತಿ ಮಾಡಲು, ಅಂಚೆ ಕಳುಹಿಸಲು ಮಗನ ಅಗತ್ಯ ಅವಶ್ಯಕವಾಗಿತ್ತು. ಹೀಗೆ ಕಾಲ ಕಳೆದು ತೊಂಭತ್ತರ ದಶಕದ ಕೊನೆಯಲ್ಲಿ ಸುಮಾರು ಮಕ್ಕಳು ಓದನ್ನು ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದಾಗ್ಯೂ, ಕೆಲವೊಮ್ಮೆ ಅರ್ಜಿಗಳನ್ನು ತುಂಬಲು ಮಗನ ಸಹಾಯ ಕೇಳುತ್ತಿದ್ದರು. ಮಗ...

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

 ಒಂದೂರಿನ ಶಾಂತವಾದ ನೆರೆಹೊರೆಯಲ್ಲಿ ನಾವೊಂದು ಮನೆಯನ್ನು ಕಟ್ಟಿಕೊಂಡು ಜೇವನವನ್ನು ಆನಂದಿಸುತ್ತಾ  ಕಳೆಯುತ್ತಿದ್ದೆವು. ಮನೆ ಕೆಲಸದವರ ಕೊರತೆಯಿಂದಾಗಿ, ಮನೆಯನ್ನು ಸ್ವಚ್ಛವಾಗಿ ಇರಿಸಲು ಒಂದು ರೋಬೊ ವಾಕ್ಯೂಮ್ ಅನ್ನು ಖರೀದಿ ಮಾಡಿದ್ದೆವು. ಅದು ಪ್ರತಿ ದಿನ ಮನೆಯ ಪ್ರತಿ ಮಹಡಿಯ ನೆಲವನ್ನು ಗುಡಿಸಿ ತನ್ನ ಪಾಡಿಗೆ ಒಂದು ಮೂಲೆಯಲ್ಲಿ ಇಟ್ಟಿದ್ದ ಚಾರ್ಜಿಂಗ್ ಸ್ಟೇಷನ್ ಮೇಲೆ ವಿರಮಿಸುತಿತ್ತು. ವಾರಕ್ಕೊಮ್ಮೆ ನಾವು ಸಾರಿಸಿಕೊಳ್ಳುತ್ತಿದ್ದೆವು. ಜೀವನ ಸರಳವಾಗಿತ್ತು. ನನ್ನ ಗೆಳೆಯ ಒಬ್ಬ IoT ತಂತ್ರಜ್ಞ. ಅವನ ಜೊತೆ ಕೂಡಿ, ಏನೇನೋ ಸರ್ಕಸ್ ಮಾಡಿ, ರೋಬೊ ಲಿಫ್ಟ್ ಹತ್ತಿರ ಬಂದು ಒಂದು ನಿಮಿಷದ ಕಾಲ ನಿಂತಾಗ, ಲಿಫ್ಟ್ ತನ್ನಂತಾನೆ ಬಾಗಿಲು ತೆಗೆಯುವಂತೆ ಮಾಡಿ, ಮತ್ತು ಲಿಫ್ಟಿನಲ್ಲೂ ಕೆಲವು ಲಾಜಿಕ್ ಬೋರ್ಡ್ ಹಾಕಿ, ರೋಬೊ ಪ್ರತಿ ಹಂತಕ್ಕೆ ಹೋಗುವಂತೆ ಮಾಡಿದ್ದ. ಇದರಿಂದಾಗಿ, ರೋಬೊ ಗಡಿಯಾರದಂತೆ ತನ್ನ ದಿನಚರಿಯನ್ನು ಪಾಲಿಸುತಿತ್ತು. ಆದರೆ ಜೀವನವು ಅದರದ್ದೇ ಆದ ನಿಗೂಢತೆ ಹಾಗು ಅನಿರೀಕ್ಷಿತತೆ ಹೊಂದಿರುತ್ತೆ. ಅಲ್ಲವೇ? ಕೆಲವು ವಾರಗಳ ನಂತರ, ನಮ್ಮ ಪಕ್ಕದ ಮನೆಯವರು ಸಹ ರೋಬೋ ವ್ಯಾಕ್ಯೂಮ್ ಅನ್ನು ಖರೀದಿ ಮಾಡಿ ಬಳಸಲು ಶುರು ಮಾಡಿದರು. ನನ್ನ ಬಳಿ ಬಂದು ಸ್ವಲ್ಪ ವಿಚಾರ ಕೂಡ ಮಾಡಿದ್ದರು. ಆದರೆ, ಕೊನೆಗೆ ಅವರು ಬೇರೆ ಕಂಪನಿಯ ರೋಬೊಗೆ ಮೊರೆ ಹೋಗಿದ್ದರು. ಒಂದು ಸಂಜೆ ನಾನು ವಿಚಿತ್ರವನ್ನು ಗಮನಿಸಿದೆ. ನನ್ನ ರೋಬೋ ಲಿವಿಂಗ್ ರೂಮ್ ಕಿಟಕಿ...

ರೆ...

Rudyard Kipling ಅವರ "IF" ಕವನದ ಕನ್ನಡ ಅನುವಾದ - ಒಂದು ಸಣ್ಣ ಪ್ರಯತ್ನ. - Jnanesha (Rudyard Kipling's "If" is a timeless poem, that guides us through life's challenges with virtues of patience, resilience, and integrity. It inspires greatness and reminds us to stay true to our values in the face of adversity.) ಜನರೆಲ್ಲರೂ ಮತಿಯಿಲ್ಲದೆ ನಿನ್ನನ್ನು ದೂಷಿಸುವಾಗ ನೀನು ಶಾಂತಚಿತ್ತನಾಗಿ ಇರುವುದಾದರೆ ಎಲ್ಲರೂ ನಿನ್ನನ್ನು ಸಂದೇಹಾತ್ಮಕವಾಗಿ ನೋಡಿದರೂ ನೀನು ಆತ್ಮವಿಶ್ವಾಸಿಯಾಗಿ ಅವುಗಳನ್ನು ಮನ್ನಿಸಿದರೆ ಫಲಕ್ಕಾಗಿ ನಿರುತ್ಸಾಹಗೊಳ್ಳದೆ ತಾಳಿದರೆ ನಿನ್ನ ಬಗ್ಗೆ ಸುಳ್ಳು ಕೇಳಿದರೂ, ನೀನು ಸುಳ್ಳು ಹೇಳದಿದ್ದರೆ  ನಿನ್ನನ್ನು ಪ್ರೀತಿಸದೆ ಇದ್ದರೂ ನೀನು ದ್ವೇಷದ ಮೊರೆ ಹೊಕ್ಕದಿದ್ದರೆ ಆದರೂ ನೀ ಸಂಭಾವಿತ ಹಾಗೆ ಕಾಣದಿರು, ಅತಿ ಬುದ್ದಿ ತೋರದಿರು. ಆಸೆಗಳನ್ನು ಹೊತ್ತುಕೊಂಡರೂ ಸಹ ಅವುಗಳ ಆಳಾಗದಿದ್ದರೆ  ಯೋಚನೆಗಳನ್ನು ಗುರಿಯಾಗಿಸದೆಯೂ ಯೋಚಿಸಿದರೆ ನಿನ್ನ ಮಡಿಲಿಗೆ ಗೆಲುವಾಗಲಿ ಸೋಲಾಗಲಿ ಒಲಿದು ಎರಡನ್ನೂ ನೀ ನಂಬಿಕೊಂಡು ಮೋಸ ಹೋಗದಿದ್ದರೆ ನೀ ನುಡಿದ ಸತ್ಯವನು ಕಿಡಿಗೇಡಿಗಳು ತಿರುಚಿ  ಮೂರ್ಖರಿಗೆ ಉಣಬಡಿಸಿದರೂ ನೀ ಶಾಂತಚಿತ್ತನಾಗಿದ್ದರೆ  ನಿನ್ನನ್ನೇ ಸಮರ್ಪಿಸಿ ರಚಿಸಿದ ಕಾರ್ಯಗಳು ವಿಫಲವಾದಾಗ  ಧೃತಿಗೆಡದೆ ಮೊದಲಿಂದ ಶುರು ಮಾಡುವ ಹುಮ್ಮಸ್ಸ...

Whispers Beyond Reach

Vishal woke up, his hand pressed against his forehead in pain, slowly regaining consciousness. Memories of the car accident flooded his mind, and he found himself in a small clinic, disoriented and anxious to locate his wife, Priya, and their child, Karuna. Glancing out of the window, he noticed villagers gathered around a bonfire, burning wood that resembled a cremation. A surge of anguish overcame him as he feared the worst – the loss of his beloved family. Overwhelmed by sorrow, Vishal rushed out of the clinic, tears streaming down his face. Determined to find Priya and Karuna, he pushed through the crowd, making his way towards the cremation site. As he approached, his heart sank, and he realized that it was indeed a cremation taking place. Vishal's throat tightened with grief, and he felt a heaviness in his legs, slowing his movements as he contemplated the devastating possibility of losing his wife and child. Suddenly, amidst the crowd, Vishal heard a familiar voice – the v...

ಸಂಗೀತದ ಚರಣ

ಭಾಗ ೧ : ಚಿಗುರು ಹೆಸರಿಗೆ ತಕ್ಕಂತೆ ತನ್ನ ಜೀವನವನ್ನು ಸುಮಧುರವಾಗಿ ಇರಿಸಿಕೊಳ್ಳಬೇಕೆಂಬ ಆಶಯವಿಟ್ಟುಕೊಂಡಿದ್ದವಳು ಸಂಗೀತ. ಈಗ ತಾನೇ ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ರೆಕ್ರೂಟ್ಮೆಂಟ್ ಮೂಲಕ ಒಂದು ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಮೈಸೂರಿನಿಂದ ಬೆಂಗಳೂರಿಗೆ ಬಂದಾಗ, ಅಣ್ಣ ಜೊತೆಯಲಿ ಬಂದು ಒಳ್ಳೆ ಏರಿಯದಲ್ಲಿ ಪಿ.ಜಿ ಮಾಡಿಕೊಟ್ಟು ಕೈಗೆ ಒಂದಷ್ಟು ಸಾವಿರ ಕೊಟ್ಟು ಹೋಗಿದ್ದನು. ಅಪ್ಪನ ಮುದ್ದು ಮಗಳಾಗಿ, ಅಣ್ಣನ ತುಂಟು ತಂಗಿಯಾಗಿ ಇದ್ದ ಅವಳನ್ನು, ಅಮ್ಮನ ಕೊರತೆ ಬರದಿರುವಷ್ಟು ಚೆನ್ನಾಗಿ ನೋಡಿಕೊಂಡಿದ್ದರು. ಅಣ್ಣನಿಗೆ ಆಗಲೇ ಮದುವೆಯ ವಯಸ್ಸು ಮೀರಿದ್ದು ಇನ್ನೂ ಕಾಯುವಂತೆ ಇರಲಿಲ್ಲ. ಇವಳ ಮದುವೆಗೆಂದು ಕಾಯುತ್ತಿದ್ದರು. ಇವಳು ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದಾಗ, ಅಪ್ಪ ಮತ್ತು ಅಣ್ಣನಿಗೆ ಇಷ್ಟವಿರಲಿಲ್ಲ. ಆದರೂ, ಭವಿಷ್ಯದ ದೃಷ್ಟಿಯಿಂದಲೂ, ಅವಳು ಸ್ವತಃ ತನ್ನ ಕಾಲಿನ ಮೇಲೆ ನಿಲ್ಲಬೇಕು ಎಂದೂ ಇಬ್ಬರು ಒಪ್ಪಿದ್ದರು. ಮತ್ತು ವರನು ಬೇಗ ಸಿಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಹೆಬ್ಬಾಳದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಎಂ.ಎನ್.ಸಿ ಯಲ್ಲಿ ಕೆಲಸ. ಕೈ ತುಂಬಾ ಸಂಬಳ. ಸಾಂಸ್ಕೃತಿಕ ನಗರದಿಂದ ಬಂದ ಸಂಗೀತಳಿಗೆ, ಸದಾ ಗಿಜಿಗಿಡುತಿದ್ದ ಮತ್ತು ಬಿಡುವಿಲ್ಲದ ಬೆಂಗಳೂರಿನ ಜೀವನ ಒಗ್ಗುವಷ್ಟರಲ್ಲಿ ಎರಡು ತಿಂಗಳುಗಳ ಕಾಲ ಕಳೆದು ಹೋಯಿತು. ಟೆಕ್ ಪಾರ್ಕಿನ ಎದುರುಗಡೆ ಏರಿಯದಲ್ಲೇ ಪಿ.ಜಿ ಇದ್ದುದ್ದರಿಂದ ಯಾ...

ಮಾದೇಶ್ವರನ ಬರಹ

ತಲೆಗೆ ಕಟ್ಟಿದ್ದ ಚಿಕ್ಕ ಟವಲ್ ತಗೆದು, ಹಣೆಯಿಂದ ಹರಿದು ಕಣ್ಣು ರೆಪ್ಪೆಯ ಮೇಲೆ ಬಂದ ಬೆವರಿನ ಹನಿಗಳನ್ನು ಒರೆಸಿ, ಮಾದಪ್ಪ ಆಗಸದತ್ತ ನೋಡಿದ. ಎಲ್ಲಿಯೂ ಒಂದು ಸಣ್ಣ ಮೋಡ ಕೂಡ ಇರಲಿಲ್ಲ. ಕಡು ಬೇಸಿಗೆಯ ಕಾಲ. ಸೊಂಟದಲ್ಲಿ ಕಟ್ಟಿಕೊಂಡಿದ್ದ ಪೆಪ್ಪರ್ಮಿಂಟು ಚೀಲದಿಂದ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡ. ಹಾಗೆ ಕೆಳಗೆ ದೃಷ್ಟಿ ಹಾಯಿಸಿದ. ಎತ್ತರದ ಗೋಡೆಗೆ ಮರದ ಗಳಗಳಿಂದ ಕಟ್ಟಿದ್ದ ಸಾರುವೆಯನ್ನು ಹತ್ತಿ ಕೂತಿದ್ದ ಅವನಿಗೆ, ಕೆಳಗೆ ಓಡಾಡುತ್ತಿದ್ದ ಜನರು ಸಣ್ಣದಾಗಿ ಕಂಡರು. ಗೋಡೆ ಮೇಲೆ ಪೈಂಟ್ ಮಾಡೋದು, ಪೋಸ್ಟರ್ ಅಂಟಿಸೋದು ಅವನಿಗೆ ಜೀವನ ನಡೆಸುವ ದಾರಿ. ಈ ರೀತಿ ಎತ್ತರದಲ್ಲಿ ಕೆಲಸ ಮಾಡುವುದು ತನ್ನ ವಯಸ್ಸಿಗೆ ಕ್ಷೇಮವಲ್ಲ ಎಂದು ಆತನಿಗೆ ಬಹಳ ಸಲ ಅನ್ನಿಸಿತ್ತು. ತನ್ನ ಮಗ ದೂರ ಮಾಡಿದಕ್ಕೆ ಕೋಪಿಸಿಕೊಳ್ಳದೆ, ಸ್ವಾಭಿಮಾನಿಯಾಗಿ ಬದುಕುತ್ತಿದ್ದ. ಏನಾದರೂ ಆಗಲಿ, ಇನ್ನೊಬ್ಬರ ಮುಂದೆ ಕೈ ಒಡ್ಡಬಾರದು ಎಂಬ ಅಚಲವಾದ ನಿರ್ಧಾರ. ಮಾದಪ್ಪನ ಊರು ಆ ಕಡೆ ಹಳ್ಳಿಯೂ ಅಲ್ಲ, ಈ ಕಡೆ ನಗರವೂ ಅಲ್ಲ. ಸುಮಾರು ಐವತ್ತು ಸಾವಿರ ಜನಸಂಖ್ಯೆ ಇದೆ. ಪ್ರಮುಖವಾದ ಎರಡು ರಾಜಕೀಯ ಪಕ್ಷಗಳದ್ದೆ ಕಾರುಬಾರು. ಒಂದು ಜನಬಲ ಪಕ್ಷ, ಇನ್ನೊಂದು ಜನಾದೇಶ ಪಕ್ಷ. ಅವೆರೆಡು ಬೇರೆ ಬೇರೆ ಸಿದ್ದಾಂತವನ್ನು ಅನುಸರಿಸುತಿದ್ದವು. ತನ್ನ ಬುದ್ದಿ ಬಂದಾಗಲಿಂದ, ಮಾದಪ್ಪ ಜನಬಲ ಪಕ್ಷದ ಕಟ್ಟಾ ಬೆಂಬಲಿಗ. ಆ ಪಕ್ಷದ ಸೈದ್ದಾಂತಿಕ ನಿಲುವುಗಳು ಮತ್ತು ನಂಬಿಕೆಗಳು ಇವನದ್ದೇ ಅನ್ನುವಷ್ಟು ಹೋಲ...

ಕವನ : ಜೀWon

ಜೀWon ಹುಟ್ಟಿಗಾಗಿ ಹೋರಾಟ ಸಾಯದೇ ಇರುವುದಕೆ ಹೋರಾಟ ಹುಟ್ಟು ಸಾವುಗಳ ಮಧ್ಯೆಯೂ ಜೀವಿಸುವುದರ ಹೋರಾಟ ಇಷ್ಟು ಸಾಲುವುದಿಲ್ಲ ಎಂಬ ಹುಂಬತನ ಬೇಡದೆ ಇರುವ ವಿಚಾರಗಳಿಗೂ ಹೋರಾಟ ಇಷ್ಟೇನಾ ಜೀವನ? ಪರಸ್ಪರ ಪ್ರೀತಿಸಿ, ಆನಂದಿಸಿ ಜೀವನದ ಪ್ರತಿ ಕ್ಷಣಗಳನು ಅನುಭವಿಸಿ ಹೀಗೂ ಬದುಕಬಹುದೆಂದು ತೋರಿಸಿ ಜೀವನ ದಾರಿಯಾಗಿರುಹುದು ಅದರಲ್ಲಿ ದಾರಿದೀಪವಾಗಿರಿ!